ಬದಲಾದ ಕಾಲಘಟ್ಟದಲ್ಲಿ ಯಕ್ಷಗಾನಕ್ಕೆ ಹೊಸ ಸಾಮಾಜಿಕ ಪ್ರಸಂಗಗಳು ಅನಿವಾರ್ಯ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 22 , 2014
|
ಜನವರಿ 22, 2014
|
ಬದಲಾದ ಕಾಲಘಟ್ಟದಲ್ಲಿ ಯಕ್ಷಗಾನಕ್ಕೆ ಹೊಸ ಸಾಮಾಜಿಕ ಪ್ರಸಂಗಗಳು ಅನಿವಾರ್ಯ
ಕು೦ಭಾಶಿ :
ವಿದ್ಯುನ್ಮಾಣ ಮತ್ತು ಇತರ ಮಾದ್ಯಮಗಳ ಪ್ರಬಾವ. ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಯುವಕರಲ್ಲಿ ಯಕ್ಷಗಾನದ ಆಸಕ್ತಿ ಕುಂದುತ್ತಿದ್ದು, ಪ್ರೇಕ್ಷಕರ ಕೊರತೆಯನ್ನು ಅನುಭವಿಸುತ್ತಿರುವ ಯಕ್ಷಗಾನ ರಂಗಕ್ಕೆ ಸಾಮಾಜಿಕವಾದ ಹೊಸ ಪ್ರಸಂಗದ ಅನಿವಾರ್ಯತೆ ಇದೆ. ಮೂಲ ಚೌಕಟ್ತಿಗೆ ಭಂಗ ಬರದ ಹಾಗೆ ಉತ್ತಮ ಛಂದಸ್ಸು ಮತ್ತು ಸಾಹಿತ್ಯದಿಂದ ಕೂಡಿದ ಪ್ರಸಂಗಗಳಿಂದ ಕಲೆಯ ಮೌಲ್ಯ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯ ಪ್ರಸಂಗಕರ್ತ ರಮೇಶ್ಮಂಜು ವಿರಚಿತ ಅರು೦ಧತಿ ಯಕ್ಷಗಾನ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲಿ” ಎಂದು ಮಣಿಪಾಲ ಎಂ. ಐ. ಟಿ ಕಾಲೇಜಿನ ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.
ಅವರು ಕುಂಬಾಶಿಯಲ್ಲಿ ಶ್ರೀ ಸಾಲಿಗ್ರಾಮ ಮೇಳದ ವೇದಿಕೆಯಲ್ಲಿ ನೆಡೆದ ರಮೇಶ್ಮಂಜು ವಿರಚಿತ ಈ ವರ್ಷದ ಹೊಸ ಪ್ರಸಂಗ ಅರು೦ಧತಿ ಎಂಬ ಆಖ್ಯಾನದ ಬಿಡುಗಡೆ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು. ಆನೆಗುಡ್ದೆ ವಿನಾಯಕ ದೇವಸ್ಥಾನದ ದರ್ಮದರ್ಶಿ ಸೂರ್ಯನಾರಾಯಣ ಉಪಾದ್ಯರು ಅದ್ಯಕ್ಷತೆ ವಹಿಸಿದ್ದರು.
ಹಿರಿಯ ಉದ್ಯಮಿ ಆನಂದ ಕುಂದರ್ ಅವರು ಕ್ರತಿ ಬಿಡುಗಡೆ ಮಾಡಿ ಮೇಳದ ಪ್ರದಾನ ಬಾಗವತ ರಾಘವೇಂದ್ರ ಮಯ್ಯರಿಗೆ ಹಸ್ತಾಂತರಿಸಿದ್ದರು. ಪ್ರಸಂಗಕರ್ತ ರಮೇಶ್ಮಂಜು ವೇದಿಕೆಯಲ್ಲಿ ಉಪಸ್ತಿತರಿದ್ದರು. ಪತ್ರಕರ್ತ ಕೆ. ರಾಮಕ್ರಷ್ಣ ಹೆರ್ಳೆ ಸ್ವಾಗತಿಸಿ ಕಾರ್ಯಕ್ರಮ ಸಂಯ್ಯೋಜಿಸಿದರು. ರಮೇಶ್ಮಂಜು ವಂದಿಸಿದರು. ಬಳಿಕ ಸಾಲಿಗ್ರಾಮ ಮೇಳದ ಕಲಾವಿದರಿಂದ ಅರು೦ಧತಿ ಪ್ರಸಂಗದ ಪ್ರಥಮ ಪ್ರದರ್ಶನ ನೆಡೆಯಿತು.
|
|
|