ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಬದಲಾದ ಕಾಲಘಟ್ಟದಲ್ಲಿ ಯಕ್ಷಗಾನಕ್ಕೆ ಹೊಸ ಸಾಮಾಜಿಕ ಪ್ರಸಂಗಗಳು ಅನಿವಾರ್ಯ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 22 , 2014
ಜನವರಿ 22, 2014

ಬದಲಾದ ಕಾಲಘಟ್ಟದಲ್ಲಿ ಯಕ್ಷಗಾನಕ್ಕೆ ಹೊಸ ಸಾಮಾಜಿಕ ಪ್ರಸಂಗಗಳು ಅನಿವಾರ್ಯ

ಕು೦ಭಾಶಿ : ವಿದ್ಯುನ್ಮಾಣ ಮತ್ತು ಇತರ ಮಾದ್ಯಮಗಳ ಪ್ರಬಾವ. ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಯುವಕರಲ್ಲಿ ಯಕ್ಷಗಾನದ ಆಸಕ್ತಿ ಕುಂದುತ್ತಿದ್ದು, ಪ್ರೇಕ್ಷಕರ ಕೊರತೆಯನ್ನು ಅನುಭವಿಸುತ್ತಿರುವ ಯಕ್ಷಗಾನ ರಂಗಕ್ಕೆ ಸಾಮಾಜಿಕವಾದ ಹೊಸ ಪ್ರಸಂಗದ ಅನಿವಾರ್ಯತೆ ಇದೆ. ಮೂಲ ಚೌಕಟ್ತಿಗೆ ಭಂಗ ಬರದ ಹಾಗೆ ಉತ್ತಮ ಛಂದಸ್ಸು ಮತ್ತು ಸಾಹಿತ್ಯದಿಂದ ಕೂಡಿದ ಪ್ರಸಂಗಗಳಿಂದ ಕಲೆಯ ಮೌಲ್ಯ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯ ಪ್ರಸಂಗಕರ್ತ ರಮೇಶ್ಮಂಜು ವಿರಚಿತ ಅರು೦ಧತಿ ಯಕ್ಷಗಾನ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲಿ” ಎಂದು ಮಣಿಪಾಲ ಎಂ. ಐ. ಟಿ ಕಾಲೇಜಿನ ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.

ಅವರು ಕುಂಬಾಶಿಯಲ್ಲಿ ಶ್ರೀ ಸಾಲಿಗ್ರಾಮ ಮೇಳದ ವೇದಿಕೆಯಲ್ಲಿ ನೆಡೆದ ರಮೇಶ್ಮಂಜು ವಿರಚಿತ ಈ ವರ್ಷದ ಹೊಸ ಪ್ರಸಂಗ ಅರು೦ಧತಿ ಎಂಬ ಆಖ್ಯಾನದ ಬಿಡುಗಡೆ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು. ಆನೆಗುಡ್ದೆ ವಿನಾಯಕ ದೇವಸ್ಥಾನದ ದರ್ಮದರ್ಶಿ ಸೂರ್ಯನಾರಾಯಣ ಉಪಾದ್ಯರು ಅದ್ಯಕ್ಷತೆ ವಹಿಸಿದ್ದರು.

ಹಿರಿಯ ಉದ್ಯಮಿ ಆನಂದ ಕುಂದರ್ ಅವರು ಕ್ರತಿ ಬಿಡುಗಡೆ ಮಾಡಿ ಮೇಳದ ಪ್ರದಾನ ಬಾಗವತ ರಾಘವೇಂದ್ರ ಮಯ್ಯರಿಗೆ ಹಸ್ತಾಂತರಿಸಿದ್ದರು. ಪ್ರಸಂಗಕರ್ತ ರಮೇಶ್ಮಂಜು ವೇದಿಕೆಯಲ್ಲಿ ಉಪಸ್ತಿತರಿದ್ದರು. ಪತ್ರಕರ್ತ ಕೆ. ರಾಮಕ್ರಷ್ಣ ಹೆರ್ಳೆ ಸ್ವಾಗತಿಸಿ ಕಾರ್ಯಕ್ರಮ ಸಂಯ್ಯೋಜಿಸಿದರು. ರಮೇಶ್ಮಂಜು ವಂದಿಸಿದರು. ಬಳಿಕ ಸಾಲಿಗ್ರಾಮ ಮೇಳದ ಕಲಾವಿದರಿಂದ ಅರು೦ಧತಿ ಪ್ರಸಂಗದ ಪ್ರಥಮ ಪ್ರದರ್ಶನ ನೆಡೆಯಿತು.






Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ